ಪ್ರಸ್ತುತ ಬೆಂಗಳೂರಿನಲ್ಲಿ 1.09 ಕೋಟಿ ಮತದಾರರು ಎಎಸ್ಡಿಡಿಒ ಪಟ್ಟಿಯಲ್ಲಿದ್ದಾರೆ. ಅಲ್ಲದೇ ಬೆಂಗಳೂರಿನ ಸುಮಾರು 3,000 ಬೂತ್ಗಳಲ್ಲಿ ಶೇ.60 ಕ್ಕೂ ಹೆಚ್ಚು ಮತದಾರರನ್ನು ಡಿಲೀಟ್ ಮಾಡಲು ಉದ್ದೇಶಿಸಲಾಗಿದೆ. ಸಿಎಂ ಡಿಕೆಶಿವಕುಮಾರ್ ಭೇಟಿಯಾದ ಪ್ರಕಾಶ್ ರಾಜ್ ನೇತೃತ್ವದ ನಿಯೋಗ ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಬೆಂಗಳೂರಿನ ಮತದಾರರ ಪಟ್ಟಿಯಿಂದ ಸುಮಾರು ಅರ್ಧದಷ್ಟು ಮತದಾರರು ಡಿಲೀಟ್ ಆಗುವ ಸಾಧ್ಯತೆಯಿದೆ ಎಂದು ನಟ ಪ್ರಕಾಶ್ ರಾಜ್ ನೇತೃತ್ವದ ಹಲವು ನಾಗರಿಕ ಸಂಘಟನೆಗಳ ಸದಸ್ಯರ ನಿಯೋಗ ಸೋಮವಾರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ 1.09 ಕೋಟಿ ಮತದಾರರು ಎಎಸ್ಡಿಡಿಒ ಪಟ್ಟಿಯಲ್ಲಿದ್ದಾರೆ. ಅಲ್ಲದೇ ಬೆಂಗಳೂರಿನ ಸುಮಾರು 3,000 ಬೂತ್ಗಳಲ್ಲಿ ಶೇ.60 ಕ್ಕೂ ಹೆಚ್ಚು ಮತದಾರರನ್ನು ಡಿಲೀಟ್ ಮಾಡಲು ಉದ್ದೇಶಿಸಲಾಗಿದೆ. ಬಾಡಿಗೆದಾರರು, ಕೆಲಸ ಅಥವಾ ಮದುವೆಗಾಗಿ ಸ್ಥಳಾಂತರಗೊಂಡ ಜನರು, ವೃದ್ಧ ಮತದಾರರು ಮತ್ತು ಸಣ್ಣ ರೂಪ ದೋಷಗಳನ್ನು ಹೊಂದಿರುವವರು ಮತದಾರರ ಪಟ್ಟಿಯಿಂದ ತಪ್ಪಾಗಿ ಹೊರಗಿಡುವ ಅಪಾಯದಲ್ಲಿದ್ದಾರೆ ಎಂದು ವರದಿಯಾಗಿದೆ. Representatives of Karnataka’s civil society called on Hon’ble @CMofKarnataka today and raised serious concerns over the ongoing SIR exercise.1.09 crore voters are currently in the ASDDO list, while proposed deletions cross 60% in nearly 3,000 booths in Bengaluru. Tenants,… pic.twitter.com/ExCYIJievY— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 18, 2026 ಕರ್ನಾಟಕದಲ್ಲಿ ಯಾವುದೇ ಚುನಾವಣೆ ನಡೆಯುತ್ತಿಲ್ಲ, ಈ ಪ್ರಮಾಣದ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಯಾವುದೇ ಸಮರ್ಥನೆ ಇಲ್ಲ. ಅವರು ಭಾರತದ ಚುನಾವಣಾ ಆಯೋಗದಿಂದ ವಿಸ್ತರಣೆಯನ್ನು ಕೋರಬೇಕು, ಹೊಸದಾಗಿ ಮನೆ-ಮನೆಗೆ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಪ್ರತಿಯೊಬ್ಬ ಅರ್ಹ ಮತದಾರರನ್ನು ತಪ್ಪಾಗಿ ಹೊರಗಿಡದಂತೆ ರಕ್ಷಿಸಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. #Bengaluru #SIR #ASDDOLIST #Prakashrajdelegation #CMDKShivakumar #ಬೆಂಗಳೂರು#ಎಸ್ಐಆರ್ #ಎಎಸ್ ಡಿಡಿಒಪಟ್ಟಿ #ಪ್ರಕಾಶ್ ರಾಜ್ ನಿಯೋಗ #ಸಿಎಂಡಿಕೆಶಿವಕುಮಾರ್ Share via: Facebook X (Twitter) LinkedIn More Post navigation ‘ವಿಶ್ವ ಯುವ ಕೌಶಲ್ಯ ದಿನಾಚರಣೆ – 2026’ ಕೈಯಲ್ಲಿ ಕೌಶಲ್ಯವಿದ್ದರೆ, ಬದುಕಿನಲ್ಲಿ ರಾಜಯೋಗವಿದ್ದಂತೆ: ಸಿಎಂ ಡಿಕೆ ಶಿವಕುಮಾರ್! ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ, ಕಚೇರಿ ಮೇಲೆ ಇಡಿ ದಾಳಿ!