IIHMR ಘಟಿಕೋತ್ಸವIIHMR ಘಟಿಕೋತ್ಸವ


ಎಲೆಕ್ಟ್ರಾನಿಕ್ ಸಿಟಿ ಫೇಸ್-1 ರಲ್ಲಿರುವ IIHMR ಬೆಂಗಳೂರು ಆವರಣದಲ್ಲಿ ನಡೆದ ಘಟಿಕೋತ್ಸವದಲ್ಲಿ  125 ವಿದ್ಯಾರ್ಥಿಗಳ ಸಾಧನೆಯನ್ನು ಘಟಿಕೋತ್ಸವದಲ್ಲಿ ಗೌರವಿಸಲಾಯಿತು.

IIHMR ಘಟಿಕೋತ್ಸವ ಸಮಾರಂಭ

ಬೆಂಗಳೂರು: ನ್ಯಾಕ್ ನಿಂದ  ‘A’ ಮಾನ್ಯತೆ ಪಡೆದಿರು IIHMR ಬೆಂಗಳೂರು ಸಂಸ್ಥೆಯ 15ನೇ ಘಟಿಕೋತ್ಸವ ಸಮಾರಂಭ ಅದ್ದೂರಿಯಾಗಿ ನಡೆಯಿತು. 2024–26ರ PGDM ಬ್ಯಾಚ್‌ನ ಪದವೀಧರ ವಿದ್ಯಾರ್ಥಿಗಳಿಗಾಗಿ ನಡೆದ ಈ ಸಮಾರಂಭವು ಅವರ ಶೈಕ್ಷಣಿಕ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. 

ಎಲೆಕ್ಟ್ರಾನಿಕ್ ಸಿಟಿ ಫೇಸ್-1 ರಲ್ಲಿರುವ IIHMR ಬೆಂಗಳೂರು ಆವರಣದಲ್ಲಿ ನಡೆದ ಘಟಿಕೋತ್ಸವದಲ್ಲಿ  ಆಸ್ಪತ್ರೆ ಮತ್ತು ಆರೋಗ್ಯ ನಿರ್ವಹಣೆಯಲ್ಲಿನ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ (PGDM) ಕಾರ್ಯಕ್ರಮದ ಆಸ್ಪತ್ರೆ ನಿರ್ವಹಣೆ, ಹೆಲ್ತ್ IT ನಿರ್ವಹಣೆ ಮತ್ತು ಫಾರ್ಮಾಸ್ಯುಟಿಕಲ್ ನಿರ್ವಹಣೆ ವಿಶೇಷೀಕರಣಗಳು ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್‌ನಲ್ಲಿನ PGDM ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 125 ವಿದ್ಯಾರ್ಥಿಗಳ ಸಾಧನೆಯನ್ನು ಘಟಿಕೋತ್ಸವದಲ್ಲಿ ಗೌರವಿಸಲಾಯಿತು.

ವಿಶ್ವ ಮಧುಮೇಹ ಪ್ರತಿಷ್ಠಾನ, ಕೋಪನ್‌ಹೇಗನ್, ಡೆನ್ಮಾರ್ಕ್‌ನ ಅಧ್ಯಕ್ಷರಾದ ಡಾ. ಅನಿಲ್ ಕಪೂರ್, M.D., ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದು, ಪದವೀಧರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಆರೋಗ್ಯ ಕ್ಷೇತ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ತಮ್ಮ ಜ್ಞಾನ, ಡಿಜಿಟಲ್ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಅರ್ಥಪೂರ್ಣ ಪರಿವರ್ತನೆ ತರಬೇಕು ಹಾಗೂ ರೋಗಗಳಿಗೆ ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಅವುಗಳನ್ನು ತಡೆಗಟ್ಟುವ ಮತ್ತು ಜೀವನಪರ್ಯಂತ ಆರೋಗ್ಯವನ್ನು ಉತ್ತೇಜಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

IIHMR ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಎಸ್. ಡಿ. ಗುಪ್ತಾ ಮಾತನಾಡಿ, ವೃತ್ತಿಪರ ಜಗತ್ತಿಗೆ ಪ್ರವೇಶಿಸುವಾಗ, ಯಶಸ್ಸು ನಿಮ್ಮ ನಡವಳಿಕೆ, ಸಂವಹನ, ತಂಡದ ಕೆಲಸ ಮತ್ತು ನಿರಂತರ ಕಲಿಕೆಯ ಬದ್ಧತೆಯಿಂದ ರೂಪುಗೊಳ್ಳುತ್ತದೆ ಎಂಬುದನ್ನು ನೆನಪಿಡಿ. ಈ ಗುಣಗಳು ನಿಮ್ಮ ಬೆಳವಣಿಗೆಗೆ ನೆರವಾಗುವುದರ ಜೊತೆಗೆ ಅರ್ಥಪೂರ್ಣ ಬದಲಾವಣೆ ತರಲು ಸಹಾಯ ಮಾಡುತ್ತವೆ ಎಂದು ಹೇಳಿದರು.

IIHMR ಬೆಂಗಳೂರಿನ ನಿರ್ದೇಶಕರಾದ ಡಾ. ಉಷಾ ಮಂಜುನಾಥ್ ಅವರು ಪದವೀಧರ ವಿದ್ಯಾರ್ಥಿಗಳು ಸಮರ್ಥ, ನೈತಿಕ ಮತ್ತು ನವೀನ ಚಿಂತನೆಯ ಆರೋಗ್ಯ ಕ್ಷೇತ್ರದ ನಾಯಕರಾಗಿ ಹೊರಹೊಮ್ಮಬೇಕು ಹಾಗೂ ಭವಿಷ್ಯದ ಆರೋಗ್ಯ ಕ್ಷೇತ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರಬೇಕು ಎಂದು ಪ್ರೋತ್ಸಾಹಿಸಿದರು.

ಸಮಾರಂಭದಲ್ಲಿ PHANA ಅಧ್ಯಕ್ಷರು ಹಾಗೂ ಬೆಂಗಳೂರಿನ ನೇಹಾ ಪ್ರಕಾಶ್ ಆಸ್ಪತ್ರೆಯ ಮಾಲೀಕರು ಮತ್ತು ಮುಖ್ಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಶೋಭಾ ಪ್ರಕಾಶ್, ESICಯ ಮಾಜಿ ಮಹಾನಿರ್ದೇಶಕರು ಹಾಗೂ IIHMR ಬೆಂಗಳೂರಿನ ಹಿರಿಯ ಸಲಹೆಗಾರರಾದ ಡಾ. ಸಿ. ಎಸ್. ಕೇದಾರ್, IAS (ನಿವೃತ್ತ), ಮತ್ತು ಬನ್ಯನ್ ಅಕಾಡೆಮಿ ಆಫ್ ಲೀಡರ್‌ಶಿಪ್ ಇನ್ ಮೆಂಟಲ್ ಹೆಲ್ತ್ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿಸಿಟಿಂಗ್ ಸೈಂಟಿಸ್ಟ್ ಡಾ. ನಚಿಕೇತ್ ಮೋರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಶೈಕ್ಷಣಿಕ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ಶ್ರೀ ವಿ. ಪಿ. ಅಗರ್ವಾಲ್ ಚಿನ್ನದ ಪದಕವನ್ನು ನಾಲ್ವರು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಆಸ್ಪತ್ರೆ ನಿರ್ವಹಣೆಗೆ ಶ್ರೀಮತಿ ಟಿ. ರುಚಿತಾ, ಹೆಲ್ತ್ ಇನ್ಫರ್ಮೇಷನ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್‌ಗೆ ಡಾ. ಅಂಜಲಿ, ಫಾರ್ಮಾಸ್ಯುಟಿಕಲ್ ಮ್ಯಾನೇಜ್‌ಮೆಂಟ್‌ಗೆ ಶ್ರೀಮತಿ ಶೈಕ್ ಆಯಿಷಾ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಡೇಟಾ ಸೈನ್ಸ್‌ಗೆ ಡಾ. ದೇವ್ ತೇಜಸ್ ಭಾಲಚಂದ್ರ ಅವರು ಈ ಗೌರವಕ್ಕೆ ಭಾಜನರಾದರು.

ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿನ ಅತ್ಯುತ್ತಮ ಸಮಗ್ರ ಸಾಧನೆಗಾಗಿ ನೀಡಲಾಗುವ ಶ್ರೀ ಎಂ. ಎಲ್. ಮೆಹತಾ ಚಿನ್ನದ ಪದಕವನ್ನು ಶ್ರೀಮತಿ ಶೈಕ್ ಆಯಿಷಾ ಅವರಿಗೆ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಪ್ರಿ-ಹಾಸ್ಪಿಟಲ್ ಕೇರ್ ನಿರ್ವಹಣೆಯಲ್ಲಿನ ಪೋಸ್ಟ್ ಗ್ರಾಜುಯೇಟ್ ಸರ್ಟಿಫಿಕೇಟ್ ಇನ್ ಮ್ಯಾನೇಜ್‌ಮೆಂಟ್ (PGCM–PHC) ಮತ್ತು ಕಮ್ಯೂನಿಟಿ ಹೆಲ್ತ್ ಅಂಡ್ ಡಿಜಿಟಲ್ ಹೆಲ್ತ್‌ಕೇರ್ ಆಪರೇಷನ್ಸ್ (DCDHO) ಕಾರ್ಯಕ್ರಮಗಳ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳು ಮತ್ತು ಡಿಪ್ಲೊಮಾಗಳನ್ನು ಪ್ರದಾನ ಮಾಡುವ ಮೂಲಕ ಸಂಸ್ಥೆಯು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿತು. 15ನೇ ಘಟಿಕೋತ್ಸವ ಸಮಾರಂಭವು ಕೌಶಲ್ಯಪೂರ್ಣ, ನೈತಿಕ ಮತ್ತು ಭವಿಷ್ಯಕ್ಕೆ ಸಿದ್ಧರಾಗಿರುವ ವೃತ್ತಿಪರರನ್ನು ರೂಪಿಸುವ IIHMR ಬೆಂಗಳೂರಿನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸಿತು. 

#Bengaluru #IIHMR #Convocation #ಬೆಂಗಳೂರು#ಐಐಹೆಚ್ಎಂಆರ್ #ಘಟಿಕೋತ್ಸವ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link