ಟೆಹರಾನ್


ಇಸ್ರೇಲ್ ರಕ್ಷಣಾ ಪಡೆಗಳು ಖಮೇನಿ ಕುಟುಂಬ ನಿರ್ಮೂಲನೆಯನ್ನು ಪೂರ್ಣಗೊಳಿಸಲು ಅಮೆರಿಕದ ಒಪ್ಪಿಗೆಗಾಗಿ ಕಾಯುತ್ತಿವೆ ಎಂದು ಜೆರುಸಲೆಂ ಪೋಸ್ಟ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನವದೆಹಲಿ: ಇರಾನ್ ವಿರುದ್ಧ ಮಿಲಿಟರಿ ಕ್ರಮವನ್ನು ಹೆಚ್ಚಿಸಲು ಇಸ್ರೇಲ್ ಸಿದ್ಧವಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಆದರೆ ಮುಂದಿನ ಕಾರ್ಯಾಚರಣೆ ಮುಂದುವರಿಸಲು ಅಮೆರಿಕದ ಒಪ್ಪಿಗೆಗಾಗಿ ಕಾಯುತ್ತಿದೆ ಎಂದು ಜೆರುಸಲೆಂ ಪೋಸ್ಟ್‌ ವರದಿಯಲ್ಲಿ ಹೇಳಲಾಗಿದೆ.

ಇಸ್ರೇಲ್ ರಕ್ಷಣಾ ಪಡೆಗಳು ಖಮೇನಿ ಕುಟುಂಬ ನಿರ್ಮೂಲನೆಯನ್ನು ಪೂರ್ಣಗೊಳಿಸಲು ಅಮೆರಿಕದ ಒಪ್ಪಿಗೆಗಾಗಿ ಕಾಯುತ್ತಿವೆ ಎಂದು ಜೆರುಸಲೆಂ ಪೋಸ್ಟ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಈ ನಡುವೆ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನ ಮತ್ತು ವಿಮಾನ ಸೇವೆಗಳ ಅನಿಶ್ಚಿತತೆ ನಡುವೆ ಇರಾನ್ ಗೆ ಅನಗತ್ಯ ಸಂಚಾರ ಮಾಡದಂತೆ ಭಾರತೀಯ ನಾಗರಿಕರಿಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದು, ಭಾರತೀಯರು ಯಾವುದೇ ರೀತಿಯಲ್ಲಿ ಇರಾನ್‌ಗೆ ಪ್ರಯಾಣಿಸುವುದನ್ನು ತಡೆಯಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ ಮತ್ತು ಈಗಾಗಲೇ ದೇಶದಲ್ಲಿರುವವರು ರಾಯಭಾರ ಕಚೇರಿಯ ಸಮನ್ವಯದೊಂದಿಗೆ ಹೊರಡುವಂತೆ ಸಲಹೆ ನೀಡಿದೆ.

ಭಾರತ ಮತ್ತು ಇರಾನ್ ನಡುವೆ ಕೆಲವು ವಿಮಾನಗಳು ಪ್ರಾರಂಭವಾಗುವ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ನಾಗರಿಕರು ವಿಮಾನ ಅಥವಾ ಭೂ ಮೂಲಕ ಇರಾನ್‌ಗೆ ಪ್ರಯಾಣಿಸದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ವಾಯುಪ್ರದೇಶದ ನಿರ್ಬಂಧಗಳು ಮತ್ತು ಕಾರ್ಯಾಚರಣೆಯ ಅನಿಶ್ಚಿತತೆಗಳು ಇರಾನ್‌ಗೆ ಮತ್ತು ಅಲ್ಲಿಂದ ಹೊರಡುವ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ರಾಯಭಾರ ಕಚೇರಿ ತಿಳಿಸಿದೆ.

“ಪ್ರಸ್ತುತ ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಗೊತ್ತುಪಡಿಸಿದ ಭೂ ಗಡಿ ಮಾರ್ಗಗಳ ಮೂಲಕ ದೇಶವನ್ನು ತೊರೆಯಬೇಕು ಎಂದು ಹೇಳಲಾಗಿದೆ. 

ಇದು ರಾಯಭಾರ ಕಚೇರಿಯೊಂದಿಗೆ ಸಮನ್ವಯಗೊಂಡಿರುತ್ತದೆ. ನೆರವಿಗಾಗಿ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆಗಳು: +989128109115; +989128109102; +989128109109; +989932179359. ಇಮೇಲ್: cons.tehran@mea.gov.in ಸಂಪರ್ಕಿಸಬಹುದು ಎಂದು ಹೇಳಿದೆ.

#iran #avoidtravel #Advisory #indianMission #ಇರಾನ್ # ಪ್ರಯಾಣ ಬೇಡ #ಸಲಹೆ #ಭಾರತೀಯ ರಾಯಭಾರ ಕಚೇರಿ

Leave a Reply

Your email address will not be published. Required fields are marked *