ಸಿಎಂ ರೇವಂತ್ ರೆಡ್ಡಿ, ಸುವೇಂದು ಅಧಿಕಾರಿರೇವಂತ್ ರೆಡ್ಡಿ, ಸುವೇಂದು ಅಧಿಕಾರಿ



ಆರು ವರ್ಷಗಳ ಹಿಂದೆ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿಗೆ ಸೇರಿದಂತೆ ರೆಡ್ಡಿ ರಾಜಕೀಯ ಪಕ್ಷಗಳನ್ನು ಬದಲಾಯಿಸಬಹುದು ಎಂದು ಧರ್ಮಪುರಿ ಅರವಿಂದ್ ಹೇಳಿದ್ದಾರೆ.

ಸಿಎಂ ರೇವಂತ್ ರೆಡ್ಡಿ, ಬಿಜೆಪಿ ಸಂಸದ ಧರ್ಮಪುರಿ ಅರವಿಂದ್

ನವದೆಹಲಿ: ಸುವೇಂದು ಅಧಿಕಾರಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪಕ್ಷ ಬದಲಾಯಿಸಬಹುದು ಎಂದು ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಸುಳಿವು ನೀಡಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ನಲ್ಲಿ ಸಂಚಲನ ಸೃಷ್ಟಿಸಿದೆ.

ಆರು ವರ್ಷಗಳ ಹಿಂದೆ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿಗೆ ಸೇರಿದಂತೆ ರೆಡ್ಡಿ ರಾಜಕೀಯ ಪಕ್ಷಗಳನ್ನು ಬದಲಾಯಿಸಬಹುದು ಎಂದು ಧರ್ಮಪುರಿ ಅರವಿಂದ್ ಹೇಳಿದ್ದಾರೆ.

ದಶಕಗಳನ್ನು ಕಾಂಗ್ರೆಸ್‌ನಲ್ಲಿ ಕಳೆದ ಪಕ್ಷದ ಹಿರಿಯ ನಾಯಕರನ್ನು ನಿರ್ಲಕ್ಷಿಸಿ ರೇವಂತ್ ರೆಡ್ಡಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ನಾಯಕತ್ವ ತಪ್ಪು ಮಾಡಿದೆ ಎಂದು ಅರವಿಂದ್ ಹೇಳಿದ್ದಾರೆ. ಬಳಿಕ ರೇವಂತ್ ರೆಡ್ಡಿ ಮತ್ತು ಸುವೇಂದು ಅಧಿಕಾರಿ ನಡುವೆ ಹೋಲಿಕೆ ಮಾಡಿದ್ದಾರೆ. ಸುವೇಂದು ಅಧಿಕಾರಿ ಬಿಜೆಪಿಗೆ ಸೇರಿ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಮತಾ ಬ್ಯಾನರ್ಜಿಯವರ ಪ್ರಬಲ ಎದುರಾಳಿಗಳಲ್ಲಿ ಒಬ್ಬರಾಗಿದ್ದಾರೆ.

2028-29ರಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲನ್ನು ಎದುರಿಸಲಿದೆ” ಎಂದು ಧರ್ಮಪುರಿ ಅರವಿಂದ್ ಹೇಳಿದ್ದಾರೆ.

#RevanthReddy #Suvendu Adhikari #BJP MP #Dharmapuri Arvind #ರೇವಂತ್ ರೆಡ್ಡಿ #ಸುವೇಂದು ಅಧಿಕಾರಿ #ಬಿಜೆಪಿಸಂಸದ #ಧರ್ಮಪುರಿ ಅರವಿಂದ್

Leave a Reply

Your email address will not be published. Required fields are marked *