ಬಿ.ವೈ.ವಿಜಯೇಂದ್ರಬಿ.ವೈ.ವಿಜಯೇಂದ್ರ



ಪಕ್ಷದ  ಮೀರ್  ಸಾದಿಕರ ವಿರುದ್ಧ  ಖಂಡಿತ  ಶಿಸ್ತು ಕ್ರಮ  ಕೈಗೊಳ್ಳಲಾಗುವುದು. ಅಡ್ಡಮತದಾನವನ್ನು  ಪಕ್ಷ ಗಂಭೀರವಾಗಿ ಪರಿಗಣಿಸಿದೆ  ಎಂ
ದು ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ  ಮತದಾನ ಮಾಡಿದವರನ್ನು  ಕ್ಷಮಿಸುವ ಪ್ರಶ್ನೆಯೇ  ಇಲ್ಲ  ಎಂದು ಬಿಜೆಪಿ  ರಾಜ್ಯಾಧ್ಯಕ್ಷ ಹಾಗೂ  ಶಾಸಕ  ಬಿ.ವೈ. ವಿಜಯೇಂದ್ರ  ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ  ಮೀರ್  ಸಾದಿಕರ ವಿರುದ್ಧ  ಖಂಡಿತ  ಶಿಸ್ತು ಕ್ರಮ  ಕೈಗೊಳ್ಳಲಾಗುವುದು. ಅಡ್ಡಮತದಾನವನ್ನು  ಪಕ್ಷ ಗಂಭೀರವಾಗಿ ಪರಿಗಣಿಸಿದೆ  ಎಂದರು.  

ಎಂಟತ್ತು  ದಿನಗಳ ಹಿಂದೆ  ಕೇಂದ್ರ ಸಚಿವ  ಎಚ್.ಡಿ.  ಕುಮಾರಸ್ವಾಮಿ  ಕರೆ  ಮಾಡಿ  ಮೂರನೇ  ಅಭ್ಯರ್ಥಿ  ಕಣಕ್ಕಿಳಿಸೋಣ ಎಂದು ಹೇಳಿದ್ದರು. ನೀವಾದರೂ  ಹಾಕಿ ನಾವಾದರೂ ಹಾಕ್ತೇವೆ.  ಒಳ್ಳೆಉದ್ದೇಶ  ಇಟ್ಟುಕೊಂಡು  ಫೈಟ್ಮಾಡೋಣ  ಎಂದಿದ್ದರು.  ಆಗ  ನೀವೇ  ಅಭ್ಯರ್ಥಿಹಾಕಿಒಟ್ಟಾಗಿ ಸೆಣಸಾಟ  ಮಾಡೋಣ ಎಂದು  ತಿಳಿಸಿದ್ದೆ. ಎರಡೂ ಪಕ್ಷಗಳ ಉದ್ದೇಶ ಒಂದೇ ಆಗಿತ್ತು. ನಿನ್ನೆ ನಡೆದ ಮತದಾನದಲ್ಲಿ ಜೆಡಿಎಸ್‍ಯಿಂದ ಆರೇಳು ಅಡ್ಡ ಮತದಾನ ಆಗಿದೆ. ಬಿಜೆಪಿಯಿಂದ ನಾಲ್ಕೈದು ಅಡ್ಡಮತದಾನ ಆಗಿದೆ. ಇದರಿಂದ ಎರಡೂ ಪಕ್ಷಗಳಿಗೆ ಬೇಸರವಾಗಿದೆ ಎಂದು ಹೇಳಿದರು. 

ಯಾರು ಅಡ್ಡ ಮತದಾನ ಮಾಡಿ ಆಟ ಆಡಿರಬಹುದು ಎಂಬ ಮಾಹಿತಿ ಸಿಕ್ಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲು ಭೇಟಿ ಮಾಡಲು ಅವಕಾಶಕ್ಕೆ ಮನವಿ ಮಾಡಿದ್ದೇನೆ. ಅವರು ಯಾವಾಗ ಅವಕಾಶಕೊಟ್ಟರೂ ಭೇಟಿಮಾಡಿ ವಿವರ ನೀಡಲಿದ್ದೇನೆ ಎಂದು ವಿವರಿಸಿದರು. 

ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಪಕ್ಷದ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಅಧ್ಯಕ್ಷನಾಗುವುದಕ್ಕೂ ಮೊದಲು ನಾನು ಕಾರ್ಯಕರ್ತ. ಪಕ್ಷದ ಹೈಕಮಾಂಡ್ ಕಾಲಕಾಲಕಾಲಕ್ಕೆ ಏನೇನು ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ. ಇಂತಹ ಮಹತ್ವದ ಚುನಾವಣೆಯಲ್ಲಿ ಹೀಗೆ ಆಗುತ್ತದೆ ಎಂಬ ಕಲ್ಪನೆ ಇರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಸಿಎಂ ಯಾರೇ ಆದರೂ ಹೆದರುವ ಪ್ರಶ್ನೆಇಲ್ಲ. ಸರ್ಕಾರ ಬಗ್ಗಿಸಲೂ ನಮಗೆ ಗೊತ್ತಿದೆ. ಇಂತಹ ಸಣ್ಣಪುಟ್ಟ ಘಟನೆಯಿಂದ ವಿಚಲಿತ ಆಗಿ ಓಡಿ ಹೋಗಲ್ಲ. ಎಲ್ಲವನ್ನು ಅರಗಿಸಿಕೊಳ್ಳಬಲ್ಲೇ ಎಂದರು.

#LegislativeCouncilelection #BJPcross voting #BYVijayendra #ವಿಧಾನಪರಿಷತ್ ಚುನಾವಣೆ #ಬಿಜೆಪಿಅಡ್ಡ ಮತದಾನ #ಬಿವೈ ವಿಜಯೇಂದ್ರ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link