ಡಿಕೆ ಶಿವಕುಮಾರ್


“ಯುದ್ಧ ನಡೆಯುತ್ತಿರುವ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಮಿತ್ರರಾಷ್ಟ್ರಗಳ ಜೊತೆ ಉಳಿಸಿಕೊಳ್ಳಬೇಕಿರುವುದು ಅತ್ಯವಶ್ಯ. ಅನೇಕ ದೇಶಗಳು ಭಾರತವನ್ನು ಅನೇಕ ರೀತಿಯಲ್ಲಿ ಬೆಂಬಲಿಸಿವೆ. ನಮ್ಮವಿದೇಶಾಂಗನೀತಿ ವಿಫಲವಾಗದಂತೆ ನೋಡಿಕೊಳ್ಳಬೇಕು ಎಂದರು.

ಬೆಂಗಳೂರು:  ಕೇಂದ್ರಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥಮಾಡಿಕೊಳ್ಳಬೇಕಿತ್ತು. ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಕ್ಕೆ ಕುಸಿದಿದೆ. ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಗಾಂಧಿನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆ ಶಿವಕುಮಾರ್, 
ವಾಣಿಜ್ಯ  ಸಿಲಿಂಡರ್ ಬೆಲೆ  ಹೆಚ್ಚಳದ  ಹೊರೆ  ಜನಸಾಮಾನ್ಯರ ಮೇಲೆಯೇಹೋಗುತ್ತದೆ.  ಇದರಿಂದಾಗಿ  ಅನೇಕ ಹೋಟೆಲ್ ಗಳು ಬಂದ್ ಆಗಿವೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಮನವಿಡಬೇಕಿತ್ತು.  ಸರ್ಕಾರ  ಜನರ  ಮೇಲಿನ  ಹೊರೆ ಇಳಿಸಬೇಕು. ಬೆಲೆ ಏರಿಕೆಯಿಲ್ಲದೇ ಜನಸಾಮಾನ್ಯ ನಿಶ್ಚಿಂತೆಯಿಂದ ಬದುಕುವ  ದಾರಿಯನ್ನು  ಕೇಂದ್ರಸರ್ಕಾರ ಮಾಡಬೇಕಿದೆ” ಎಂದರು.


“ಯುದ್ಧ  ನಡೆಯುತ್ತಿರುವ ಹೊತ್ತಿನಲ್ಲಿ  ಅಂತರರಾಷ್ಟ್ರೀಯ  ಸಂಬಂಧಗಳನ್ನು  ಮಿತ್ರ  ರಾಷ್ಟ್ರಗಳ  ಜೊತೆ  ಉಳಿಸಿಕೊಳ್ಳಬೇಕಿರುವುದು  ಅತ್ಯವಶ್ಯ.  ಅನೇಕ  ದೇಶಗಳು  ಭಾರತವನ್ನು ಅನೇಕ  ರೀತಿಯಲ್ಲಿ  ಬೆಂಬಲಿಸಿವೆ.  ನಮ್ಮ  ವಿದೇಶಾಂಗ  ನೀತಿ  ವಿಫಲವಾಗದಂತೆ ನೋಡಿಕೊಳ್ಳಬೇಕು”ಎಂದು ಹೇಳಿದರು.

#commercial LPG cylinders #Karnataka #DCMDKSHIVAKUMAR #Center #ವಾಣಿಜ್ಯ ಎಲ್ ಪಿಜಿ ಸಿಲಿಂಡರ್ #ಕರ್ನಾಟಕ #ಡಿಸಿಎಂ ಡಿಕೆ ಶಿವಕುಮಾರ್ #ಕೇಂದ್ರ ಸರ್ಕಾರ

Leave a Reply

Your email address will not be published. Required fields are marked *